ಕಿರು ಪರಿಚಯಗಳು, ದಿನಚರಿಗಳು, ವೀಡಿಯೋಗಳು, ಸಂಭಾಷಣೆಗಳು: ಈ ವಿಭಾಗದಲ್ಲಿರುವ ಪ್ರತಿ ಅಂಶವೂ ನಾವು ಮತ್ತು ನಮ್ಮ ಕೆಲಸದತ್ತ ನಿಮ್ಮನ್ನು ಇನ್ನಷ್ಟು ಹತ್ತಿರಕ್ಕೆ ಸೆಳೆಯುತ್ತದೆ
ನಮ್ಮ ಮೂರು ಕಾರ್ಯಾಚರಣೆಯ ಘಟಕಗಳು (ಕ್ಷೇತ್ರ ಸಂಸ್ಥೆಗಳು, ಲೋಕೋಪಕಾರಿ ಘಟಕ ಮತ್ತು ವಿಶ್ವವಿದ್ಯಾಲಯಗಳು), ನ್ಯಾಯಯುತ, ಸಮಾನ, ಮಾನವೀಯ ಮತ್ತು ಸುಸ್ಥಿರ ಸಮಾಜದ ಸ್ಥಾಪನೆಗಾಗಿ ಕೊಡುಗೆ ನೀಡುವ ಫೌಂಡೇಷನ್ನ ಧ್ಯೇಯಕ್ಕೆ ಉತ್ತೇಜನ ನೀಡಲು ಏಕೀಕೃತ ರೀತಿಯಲ್ಲಿ ಕೆಲಸ ಮಾಡುತ್ತವೆ. ಭಾರತದಾದ್ಯಂತ ಇರುವ ನಮ್ಮ ಜನರು ಮತ್ತು ಪಾಲುದಾರರಿಂದ ನೇರವಾಗಿ ಈ ಮೂರು ಘಟಕಗಳ ಸಂಕಥನಗಳ ಸಂಗ್ರಹವನ್ನು ನಾವು ನಿಮ್ಮ ಮುಂದೆ ಪ್ರಸ್ತುತ ಪಡಿಸುತ್ತಿದ್ದೇವೆ. ವಿಡಿಯೊ, ಚಲಿಸುವ ಚಿತ್ರಗಳು (ಅನಿಮೇಶನ್), ಸಂದರ್ಶನಗಳು ಮತ್ತು ಜರ್ನಲ್ಗಳ ರೂಪದಲ್ಲಿರುವ ಈ ಸಂಕಥನಗಳು, ತಾನು ತೊಡಗಿಸಿಕೊಂಡಿರುವ ವಿವಿಧ ಕ್ಷೇತ್ರಗಳಲ್ಲಿ ಫೌಂಡೇಷನ್ನ ಪಯಣ ಹಾಗೂ ಇದು ಉಂಟು ಮಾಡಿರುವ ಪರಿಣಾಮಕ್ಕೆ ಕನ್ನಡಿ ಹಿಡಿಯುತ್ತವೆ.
ಕಥಾವನ 2023 – ಒಂದು
‘ಕಥಾವನ’ ಅಜೀಂ ಪ್ರೇಮ್ಜಿ ವಿಶ್ವವಿದ್ಯಾಲಯವು 2012ರಿಂದ ಆಯೋಜಿಸುತ್ತಿರುವ ಮಕ್ಕಳ ವಾರ್ಷಿಕ ದ್ವಿಭಾಷಾ (ಕನ್ನಡ ಮತ್ತು ಇಂಗ್ಲಿಷ್) ಸಾಹಿತ್ಯೋತ್ಸವ. 2023ನೇ ಸಂಚಿಕೆಯ ʼಕಥಾವನʼದಲ್ಲಿ ಅಲೆದಾಡಿ, ಕರ್ನಾಟಕದ ವಿದ್ಯಾರ್ಥಿಗಳು ಮತ್ತು ಶಿಕ್ಷಕರಿಗೆ ಮಕ್ಕಳ ಸಾಹಿತ್ಯವು ಲಭ್ಯವಾಗುವಂತೆ ಮಾಡಿದ ಮೂರು ಆಸಕ್ತಿಕರ ಕಾರ್ಯಕ್ರಮಗಳ ಬಗ್ಗೆ ತಿಳಿಯೋಣ.
ಹಳೆವಿದ್ಯಾರ್ಥಿಗಳ ಕಥೆ I ಮಿಟ್ಟಿ ಕೆಫೆ
ಮಿಟ್ಟಿ ಎನ್ನುವುದು ಆರೋಗ್ಯಕರ ಮತ್ತು ರಾಸಾಯನಿಕರಹಿತ ಆಹಾರಕ್ಕೆ ಮಾತ್ರ ಸೀಮಿತವಾಗಿಲ್ಲ. ಬದಲಾಗಿ ವಿಶೇಷ ಚೇತನ ವ್ಯಕ್ತಿಗಳು ನಡೆಸುವ ಉದ್ಯಮ ಸಮೂಹವಾಗಿದೆ. ಈ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಿ.
ಮಹಿಳಾ ಲಸಿಕಾ ಸೇನಾನಿಗಳು: ರಾಜಸ್ಥಾನದಿಂದ COVID-19 ಕಥೆಗಳು
ಈ ಛಾಯಾಚಿತ್ರ ಕಥನವು ರಾಜಸ್ಥಾನದ ಲಸಿಕಾ ಅಭಿಯಾನದಲ್ಲಿ ಭಾಗವಹಿಸಿದ ಹನ್ನೊಂದು ಮಹಿಳಾ ಮುಂಚೂಣಿ ಹೀರೋಗಳ ಅನುಭವಗಳನ್ನು ತೋರಿಸುತ್ತದೆ.
ಹಳೆವಿದ್ಯಾರ್ಥಿಗಳ ಕಥೆ I ಅಯಾಂಗ್
ಅಸ್ಸಾಂ ರಾಜ್ಯದಲ್ಲಿ ನದಿಯಿಂದ ಆವೃತವಾಗಿರುವ ಮಜೌಲಿ ದ್ವೀಪದ ಜನರ ಜೀವನೋಪಾಯವನ್ನು ಕಟ್ಟಿಕೊಡುವುದರತ್ತ ಹಳೆವಿದ್ಯಾರ್ಥಿಯೊಬ್ಬರು ರೂಪಿಸಿದ ʻಅಯಾಂಗ್ʼ ಸಂಸ್ಥೆ ವಿಶೇಷ ಗಮನವನ್ನು ನೀಡುತ್ತಿದೆ.
ಹೊಯ್ಸಳ ಏರೋಬಿಕ್ಸ್: ಮದನಿಕೆಯಂತೆ ಚಲಿಸಿ
ಹೊಯ್ಸಳ ದೇವಾಲಯದ ಗೋಡೆಗಳಲ್ಲಿರುವ ಕೆತ್ತನೆಯನ್ನು ಹಾಗೂ ಏರೋಬಿಕ್ಸ್ ತರಬೇತುದಾರರ ಚುರುಕಾದ ಚಲನೆಗಳನ್ನು ಒಮ್ಮೆ ಕಲ್ಪಿಸಿಕೊಳ್ಳಿ. ಎರಡನ್ನೂ ಒಟ್ಟಿಗೆ ತಂದಾಗ, ಬೆಂಗಳೂರಿನ ನಮ್ಮ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳ ಸೃಜನಶೀಲ ಕಾರ್ಯಯೋಜನೆಯೊಂದು ನಿಮ್ಮೆದುರು ಬಂದು ನಿಲ್ಲುತ್ತದೆ.
ಬೇಸಿಗೆ ಶಿಬಿರ 2022: ಮರಳಿ ಶಾಲೆಯತ್ತ ಪಯಣ
ಕೋವಿಡ್ ಸಾಂಕ್ರಾಮಿಕದ ಕಾರಣ 18 ತಿಂಗಳುಗಳ ದೀರ್ಘ ಬಿಡುವಿನ ನಂತರ ಶಾಲೆಗಳು ಪುನರಾರಂಭಗೊಂಡಾಗ, ಶಾಲೆಗೆ ಹಿಂದಿರುಗುವುದನ್ನು ಉತ್ತೇಜಿಸುವುದಕ್ಕಾಗಿ ನಾವು ಬೇಸಿಗೆ ಶಿಬಿರಗಳನ್ನು ಆಯೋಜಿಸಿದೆವು. ರಾಜಸ್ಥಾನದ ಬಾರ್ಮೆರ್ ನ ಕೆಲವು ಇಣುಕು ನೋಟಗಳು ಇಲ್ಲಿವೆ.
ಮೋರಿಯಲ್ಲಿ ಲಸಿಕಾ ಅಭಿಯಾನ: ಮೇಲಕ್ಕೇರುವುದು
ಭಾರತದಲ್ಲಿ ಕೋವಿಡ್ ಲಸಿಕಾ ಕಾರ್ಯಕ್ರಮಕ್ಕೆ ನೆರವು ಒದಗಿಸುವ ನಮ್ಮ ಕಾರ್ಯದ ಭಾಗವಾಗಿ ಮುಖ್ಯವಾಗಿ ನಾವು ಅಸ್ತಿತ್ವದಲ್ಲಿರುವ ದೂರದ ಮತ್ತು ಹಿಂದುಳಿದ ಜಿಲ್ಲೆಗಳಲ್ಲಿ ಸವಾಲುಗಳನ್ನು ಮೆಟ್ಟಿ ನಿಲ್ಲಬೇಕಾಯಿತು. ಆ ಕಾಲದ ಹೇಳಿಕೊಳ್ಳದ ಒಂದು ಕಥೆ ಇಲ್ಲಿದೆ.
ವೈದ್ಯರೊಬ್ಬರ ಅನುಭವ: ರಾಜಸ್ಥಾನದಿಂದ ಕೋವಿಡ್ – 19 ಕಥೆಗಳು
ʻಭಾರತದಲ್ಲಿ ಕೋವಿಡ್ - 19 ದಾಖಲೀಕರಣʼ ಸರಣಿಯ ಒಂದು ಭಾಗ