ಕಿರು ಪರಿಚಯಗಳು, ದಿನಚರಿಗಳು, ವೀಡಿಯೋಗಳು, ಸಂಭಾಷಣೆಗಳು: ಈ ವಿಭಾಗದಲ್ಲಿರುವ ಪ್ರತಿ ಅಂಶವೂ ನಾವು ಮತ್ತು ನಮ್ಮ ಕೆಲಸದತ್ತ ನಿಮ್ಮನ್ನು ಇನ್ನಷ್ಟು ಹತ್ತಿರಕ್ಕೆ ಸೆಳೆಯುತ್ತದೆ
ನಮ್ಮ ಮೂರು ಕಾರ್ಯಾಚರಣೆಯ ಘಟಕಗಳು (ಕ್ಷೇತ್ರ ಸಂಸ್ಥೆಗಳು, ಲೋಕೋಪಕಾರಿ ಘಟಕ ಮತ್ತು ವಿಶ್ವವಿದ್ಯಾಲಯಗಳು), ನ್ಯಾಯಯುತ, ಸಮಾನ, ಮಾನವೀಯ ಮತ್ತು ಸುಸ್ಥಿರ ಸಮಾಜದ ಸ್ಥಾಪನೆಗಾಗಿ ಕೊಡುಗೆ ನೀಡುವ ಫೌಂಡೇಷನ್ನ ಧ್ಯೇಯಕ್ಕೆ ಉತ್ತೇಜನ ನೀಡಲು ಏಕೀಕೃತ ರೀತಿಯಲ್ಲಿ ಕೆಲಸ ಮಾಡುತ್ತವೆ. ಭಾರತದಾದ್ಯಂತ ಇರುವ ನಮ್ಮ ಜನರು ಮತ್ತು ಪಾಲುದಾರರಿಂದ ನೇರವಾಗಿ ಈ ಮೂರು ಘಟಕಗಳ ಸಂಕಥನಗಳ ಸಂಗ್ರಹವನ್ನು ನಾವು ನಿಮ್ಮ ಮುಂದೆ ಪ್ರಸ್ತುತ ಪಡಿಸುತ್ತಿದ್ದೇವೆ. ವಿಡಿಯೊ, ಚಲಿಸುವ ಚಿತ್ರಗಳು (ಅನಿಮೇಶನ್), ಸಂದರ್ಶನಗಳು ಮತ್ತು ಜರ್ನಲ್ಗಳ ರೂಪದಲ್ಲಿರುವ ಈ ಸಂಕಥನಗಳು, ತಾನು ತೊಡಗಿಸಿಕೊಂಡಿರುವ ವಿವಿಧ ಕ್ಷೇತ್ರಗಳಲ್ಲಿ ಫೌಂಡೇಷನ್ನ ಪಯಣ ಹಾಗೂ ಇದು ಉಂಟು ಮಾಡಿರುವ ಪರಿಣಾಮಕ್ಕೆ ಕನ್ನಡಿ ಹಿಡಿಯುತ್ತವೆ.
Nakshatragalu EP 08 | Vani M L, Mandya, Karnataka with Umashankar Periodi
Tune into Episode 08 of Nakshatragalu in which Umashankar Periodi (Head, Karnataka State, Azim Premji Foundation) introduces us to a teacher whose exemplary dedication and resourcefulness transformed her school.
ನಕ್ಷತ್ರಗಳು ಸಂಚಿಕೆ 07 | ಮಂಡ್ಯದ ವೆಂಕಟೇಶ್ ಡಿ. ಎಸ್. ಅವರೊಡನೆ ಉಮಾಶಂಕರ್ ಪೆರಿಯೋಡಿ ಅವರ ಸಂಭಾಷಣೆ
ನಕ್ಷತ್ರಗಳು ಪಾಡ್ಕ್ಯಾಸ್ಟ್ ಸರಣಿಯ 7ನೇ ಸಂಚಿಕೆಯಲ್ಲಿ, ಉಮಾಶಂಕರ್ ಪೆರಿಯೋಡಿ ಅವರು ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿನ ಶಿಕ್ಷಕರೊಬ್ಬರ ಛಲ ಮತ್ತು ಅವಿರತ ಪರಿಶ್ರಮದ ಮೇಲೆ ಬೆಳಕು ಚೆಲ್ಲುತ್ತಾರೆ. ಬದಲಾವಣೆಯನ್ನು ತರುವುದರಲ್ಲಿ ವೆಂಕಟೇಶ್ ಅವರಿಗಿರುವ ಉತ್ಸಾಹವು ಅವರ ಹಳ್ಳಿಯ ಜೀವನೋಪಾಯಗಳು ಮತ್ತು ಆರ್ಥಿಕ ಭದ್ರತೆಗಳನ್ನೂ ಹೇಗೆ ಉತ್ತಮಗೊಳಿಸುತ್ತವೆ ಎಂದು ತಿಳಿಯಿರಿ.
Nakshatragalu EP 06 | Shivabasappa, Mandya, Karnataka
Umashankar Periodi (Head, Karnataka State) takes us through Shivabasappa’s (Teacher, Hulikere Higher Primary School, Mandya, Karnataka) journey of grit and determination.
ನಕ್ಷತ್ರಗಳು | ಧರಂ ವಿಷ್ಣು ನಾಯಕ್, ಉತ್ತರ ಕನ್ನಡ, ಕರ್ನಾಟಕ
Tune into Episode 05 of Nakshatragalu in which Umashankar Periodi tells us about the Dharm Vishnu Nayak, a teacher in Uttara Kannada, Karnataka, who transformed education at his school.
ಪ್ರಾತ್ಯಕ್ಷಿಕಾ ಕಾರ್ಯಾಗಾರ, ಬಾಡ್ಮೇರ್
ಈ ರೀತಿಯ ಪ್ರಾತ್ಯಕ್ಷಿಕಾ ಕಾರ್ಯಾಗಾರಗಳು, ಶಿಕ್ಷಕ ಸಮುದಯದವರು ಬೋಧನಾ ವಿಧಾನ ಕುರಿತಾದ ಅರ್ಥಪೂರ್ಣ ಚರ್ಚೆಗಳ ಮೂಲಕ ಒಬ್ಬರಿಂದೊಬ್ಬರು ಕಲಿಯಲು ಮತ್ತು ಪರಸ್ಪರ ನೆರವಾಗಲು ಅನುವು ಮಾಡಿಕೊಡುತ್ತವೆ. ಅವು ರಾಜಾಸ್ಥಾನದ ಬಾಡ್ಮೇರ್ನ ಎಲ್ಲ ಬ್ಲಾಕ್ಗಳಲ್ಲಿ ನಡೆಯುವ ತರಬೇತಿ ಶಿಬಿರಗಳಿಗೆ ನೆರವಾಗುವ ಮೂಲಕ ಶಿಕ್ಷಕರ ಸಾಮರ್ಥ್ಯ ಅಭಿವೃದ್ಧಿಗೆ ಕೊಡುಗೆ ನೀಡುತ್ತವೆ.
ಗ್ರಾಮ ಸಭೆಗಳು ಮತ್ತು ವಿಪತ್ತು ನಿರ್ವಹಣೆ | ಲುಪುಂಗಪತ್
ಗುಮ್ಲಾ ಜಿಲ್ಲೆಯ ಲುಪುಂಗಪತ್ ಗ್ರಾಮದ ಗ್ರಾಮ ಸಭೆಯು COVID-19 ಸಮಯದಲ್ಲಿ ಸಕ್ರಿಯ ಮತ್ತು ಸಮುದಾಯವನ್ನು ಒಳಗೊಂಡ ನಿರ್ಧಾರಗಳನ್ನು ತೆಗೆದುಕೊಳ್ಳುವ ಮೂಲಕ ಅನೇಕ ಗ್ರಾಮಗಳಿಗೆ ಸ್ಫೂರ್ತಿಯಾಯಿತು. ಈ ಕಥನವು, ಸಮುದಾಯದ ಇಚ್ಛಾಶಕ್ತಿ, ಬದ್ಧತೆ ಮತ್ತು ಗ್ರಾಮ ಸಭೆಗಳು ಸಂಕಷ್ಟದ ಸಮಯದಲ್ಲಿ ಕಾರ್ಯಗಳನ್ನು ಸಾಧಿಸಬಲ್ಲವು ಎಂಬುದಕ್ಕೆ ಒಂದು ಸ್ಪಷ್ಟ ಉದಾಹರಣೆ.
ಗ್ರಾಮ ಸಭೆಗಳಲ್ಲಿ ಪಂಚಾಯತ್ನ ಪಾತ್ರ | ಆರ್ಯಾ ಪಂಚಾಯತ್
ಬಾಸಿಯಾ ಬ್ಲಾಕ್ನ (ಗುಮ್ಲಾ ಜಿಲ್ಲೆ) ಆರ್ಯಾ ಪಂಚಾಯತ್ನ ಮುಖ್ಯಸ್ಥರಾದ ಜಸಿಂತಾ ಬಾಗೆ, ತಮ್ಮ ಪಂಚಾಯತ್ ಅನ್ನು ಹೊಸ ದಿಕ್ಕುಗಳಲ್ಲಿ ಕೊಂಡೊಯ್ಯುತ್ತಿದ್ದಾರೆ. ಜಸಿಂತಾ ಪಂಚಾಯತ್ ಮತ್ತು ಗ್ರಾಮ ಸಭೆಯ ನಡುವೆ ಉತ್ತಮ ಸಮನ್ವಯವನ್ನು ಸಾಧಿಸಿದ್ದು, ಇದರಿಂದ ಆರ್ಯಾ ಜನರ ಸಮಸ್ಯೆಗಳು ಬೇಗ ಮತ್ತು ಪರಿಣಾಮಕಾರಿಯಾಗಿ ಪರಿಹಾರವಾಗುತ್ತಿವೆ.
ರಾಜಾಸ್ಥಾನದ ಬಾರ್ಮರ್ನಲ್ಲಿ ಸಾಹಿತ್ಯ ಉತ್ಸವ
ರಾಜಾಸ್ಥಾನದ ಬಾರ್ಮರ್ನ ಶಿಕ್ಷಣ ಇಲಾಖೆಯೊಂದಿಗಿನ ಸಹಯೋಗದಲ್ಲಿ ಆಯೋಜಿಸಲಾಗಿದ್ದ ಬಾರ್ಮರ್ ಲಿಟೆರೇಚರ್ ಫೆಸ್ಟಿವಲ್ನಲ್ಲಿ (14-18 ಫೆಬ್ರವರಿ 2024) 5000ಕ್ಕೂ ಹೆಚ್ಚು ಓದುಗರು ಮತ್ತು ಸಾಹಿತ್ಯ ಪ್ರೇಮಿಗಳು ಭಾಗವಹಿಸಿದ್ದರು. ಈ ಕಾರ್ಯಕ್ರಮವನ್ನು ಬಾರ್ಮರ್ನ ಅಜೀಂ ಪ್ರೇಮ್ಜಿ ಫೌಂಡೇಷನ್ನಲ್ಲಿ ಆಯೋಜಿಸಲಾಗಿತ್ತು.
ಲಸಿಕಾಂದೋಲನದ ಯಶೋಗಾಥೆಯಲ್ಲಿ ಮನೆ ಸಮೀಕ್ಷೆಯ ಪಾತ್ರ – ಉತ್ತರಾಖಂಡದಿಂದ COVID-19ರ ಕಥನಗಳು
ಈ ಚಿತ್ರಕಥೆಯು ಉತ್ತರಾಖಂಡದ ಲಸಿಕಾಂದೋಲನದ ಮುಂಚೂಣಿಯಲ್ಲದ್ದ ಇಪ್ಪತ್ತನಾಲ್ಕು ವೀರರ ಅನುಭವಗಳನ್ನು ತೋರಿಸುತ್ತದೆ. ರಾಜ್ಯದ ಎಲ್ಲರಿಗೂ ಲಸಿಕೆಗಳನ್ನು ನೀಡುವಲ್ಲಿ ಮನೆ ಸಮೀಕ್ಷೆಯ ಪ್ರಾಮುಖ್ಯತೆಯನ್ನು ತಿಳಿಯಿರಿ.
ನಕ್ಷತ್ರಗಳು EP04 | ಸಂಗಯ್ಯ, ಯಾದಗಿರ್, ಕರ್ನಾಟಕ
ʼನಕ್ಷತ್ರಗಳುʼ ಪಾಡ್ಕಾಸ್ಟ್ನ 4ನೇ ಎಪಿಸೋಡ್ನಲ್ಲಿ ಕರ್ನಾಟಕದ ಯಾದಗಿರ್ ತಾಲೂಕಿನ ಸುರ್ಪುರದಲ್ಲಿರುವ ಗದ್ದಲಮರಿ ಶಾಲೆಯ ಸುತ್ತಮುತ್ತ ಇರುವ ಹಳ್ಳಿಗಳಲ್ಲಿ ಸಂಗಯ್ಯನವರು ಕೈಗೊಂಡ ಅರಿವು ಮೂಡಿಸುವ ಪ್ರಯತ್ನಗಳ ಬಗ್ಗೆ ಮಾತನಾಡಿದ್ದಾರೆ ಉಮಾಶಂಕರ್ ಪೆರಿಯೋಡಿಯವರು. ಸಂಗಯ್ಯನವರು ಸಮುದಾಯದ ಸದಸ್ಯರು ತಮ್ಮ ಹೆಣ್ಣು ಮಕ್ಕಳನ್ನು ಶಾಲೆಗೆ ಕಳುಹಿಲು ಪ್ರೇರೇಪಿಸಿದರು. ಅವರ ಪ್ರಯತ್ನಗಳಿಂದ ಶಾಲೆಯಲ್ಲಿ ಹೆಣ್ಣು ಮಕ್ಕಳ ಹಾಜರಾತಿ ಉತ್ತಮಗೊಂಡಿತು.