ಕಿರು ಪರಿಚಯಗಳು, ದಿನಚರಿಗಳು, ವೀಡಿಯೋಗಳು, ಸಂಭಾಷಣೆಗಳು: ಈ ವಿಭಾಗದಲ್ಲಿರುವ ಪ್ರತಿ ಅಂಶವೂ ನಾವು ಮತ್ತು ನಮ್ಮ ಕೆಲಸದತ್ತ ನಿಮ್ಮನ್ನು ಇನ್ನಷ್ಟು ಹತ್ತಿರಕ್ಕೆ ಸೆಳೆಯುತ್ತದೆ
ನಮ್ಮ ಮೂರು ಕಾರ್ಯಾಚರಣೆಯ ಘಟಕಗಳು (ಕ್ಷೇತ್ರ ಸಂಸ್ಥೆಗಳು, ಲೋಕೋಪಕಾರಿ ಘಟಕ ಮತ್ತು ವಿಶ್ವವಿದ್ಯಾಲಯಗಳು), ನ್ಯಾಯಯುತ, ಸಮಾನ, ಮಾನವೀಯ ಮತ್ತು ಸುಸ್ಥಿರ ಸಮಾಜದ ಸ್ಥಾಪನೆಗಾಗಿ ಕೊಡುಗೆ ನೀಡುವ ಫೌಂಡೇಷನ್ನ ಧ್ಯೇಯಕ್ಕೆ ಉತ್ತೇಜನ ನೀಡಲು ಏಕೀಕೃತ ರೀತಿಯಲ್ಲಿ ಕೆಲಸ ಮಾಡುತ್ತವೆ. ಭಾರತದಾದ್ಯಂತ ಇರುವ ನಮ್ಮ ಜನರು ಮತ್ತು ಪಾಲುದಾರರಿಂದ ನೇರವಾಗಿ ಈ ಮೂರು ಘಟಕಗಳ ಸಂಕಥನಗಳ ಸಂಗ್ರಹವನ್ನು ನಾವು ನಿಮ್ಮ ಮುಂದೆ ಪ್ರಸ್ತುತ ಪಡಿಸುತ್ತಿದ್ದೇವೆ. ವಿಡಿಯೊ, ಚಲಿಸುವ ಚಿತ್ರಗಳು (ಅನಿಮೇಶನ್), ಸಂದರ್ಶನಗಳು ಮತ್ತು ಜರ್ನಲ್ಗಳ ರೂಪದಲ್ಲಿರುವ ಈ ಸಂಕಥನಗಳು, ತಾನು ತೊಡಗಿಸಿಕೊಂಡಿರುವ ವಿವಿಧ ಕ್ಷೇತ್ರಗಳಲ್ಲಿ ಫೌಂಡೇಷನ್ನ ಪಯಣ ಹಾಗೂ ಇದು ಉಂಟು ಮಾಡಿರುವ ಪರಿಣಾಮಕ್ಕೆ ಕನ್ನಡಿ ಹಿಡಿಯುತ್ತವೆ.
ಪ್ರಾತ್ಯಕ್ಷಿಕಾ ಕಾರ್ಯಾಗಾರ, ಬಾಡ್ಮೇರ್
ಈ ರೀತಿಯ ಪ್ರಾತ್ಯಕ್ಷಿಕಾ ಕಾರ್ಯಾಗಾರಗಳು, ಶಿಕ್ಷಕ ಸಮುದಯದವರು ಬೋಧನಾ ವಿಧಾನ ಕುರಿತಾದ ಅರ್ಥಪೂರ್ಣ ಚರ್ಚೆಗಳ ಮೂಲಕ ಒಬ್ಬರಿಂದೊಬ್ಬರು ಕಲಿಯಲು ಮತ್ತು ಪರಸ್ಪರ ನೆರವಾಗಲು ಅನುವು ಮಾಡಿಕೊಡುತ್ತವೆ. ಅವು ರಾಜಾಸ್ಥಾನದ ಬಾಡ್ಮೇರ್ನ ಎಲ್ಲ ಬ್ಲಾಕ್ಗಳಲ್ಲಿ ನಡೆಯುವ ತರಬೇತಿ ಶಿಬಿರಗಳಿಗೆ ನೆರವಾಗುವ ಮೂಲಕ ಶಿಕ್ಷಕರ ಸಾಮರ್ಥ್ಯ ಅಭಿವೃದ್ಧಿಗೆ ಕೊಡುಗೆ ನೀಡುತ್ತವೆ.
ರಾಜಾಸ್ಥಾನದ ಬಾರ್ಮರ್ನಲ್ಲಿ ಸಾಹಿತ್ಯ ಉತ್ಸವ
ರಾಜಾಸ್ಥಾನದ ಬಾರ್ಮರ್ನ ಶಿಕ್ಷಣ ಇಲಾಖೆಯೊಂದಿಗಿನ ಸಹಯೋಗದಲ್ಲಿ ಆಯೋಜಿಸಲಾಗಿದ್ದ ಬಾರ್ಮರ್ ಲಿಟೆರೇಚರ್ ಫೆಸ್ಟಿವಲ್ನಲ್ಲಿ (14-18 ಫೆಬ್ರವರಿ 2024) 5000ಕ್ಕೂ ಹೆಚ್ಚು ಓದುಗರು ಮತ್ತು ಸಾಹಿತ್ಯ ಪ್ರೇಮಿಗಳು ಭಾಗವಹಿಸಿದ್ದರು. ಈ ಕಾರ್ಯಕ್ರಮವನ್ನು ಬಾರ್ಮರ್ನ ಅಜೀಂ ಪ್ರೇಮ್ಜಿ ಫೌಂಡೇಷನ್ನಲ್ಲಿ ಆಯೋಜಿಸಲಾಗಿತ್ತು.
ನಕ್ಷತ್ರಗಳು EP04 | ಸಂಗಯ್ಯ, ಯಾದಗಿರ್, ಕರ್ನಾಟಕ
ʼನಕ್ಷತ್ರಗಳುʼ ಪಾಡ್ಕಾಸ್ಟ್ನ 4ನೇ ಎಪಿಸೋಡ್ನಲ್ಲಿ ಕರ್ನಾಟಕದ ಯಾದಗಿರ್ ತಾಲೂಕಿನ ಸುರ್ಪುರದಲ್ಲಿರುವ ಗದ್ದಲಮರಿ ಶಾಲೆಯ ಸುತ್ತಮುತ್ತ ಇರುವ ಹಳ್ಳಿಗಳಲ್ಲಿ ಸಂಗಯ್ಯನವರು ಕೈಗೊಂಡ ಅರಿವು ಮೂಡಿಸುವ ಪ್ರಯತ್ನಗಳ ಬಗ್ಗೆ ಮಾತನಾಡಿದ್ದಾರೆ ಉಮಾಶಂಕರ್ ಪೆರಿಯೋಡಿಯವರು. ಸಂಗಯ್ಯನವರು ಸಮುದಾಯದ ಸದಸ್ಯರು ತಮ್ಮ ಹೆಣ್ಣು ಮಕ್ಕಳನ್ನು ಶಾಲೆಗೆ ಕಳುಹಿಲು ಪ್ರೇರೇಪಿಸಿದರು. ಅವರ ಪ್ರಯತ್ನಗಳಿಂದ ಶಾಲೆಯಲ್ಲಿ ಹೆಣ್ಣು ಮಕ್ಕಳ ಹಾಜರಾತಿ ಉತ್ತಮಗೊಂಡಿತು.
ಬೇಸಿಗೆ ಶಿಬಿರ 2022: ಮರಳಿ ಶಾಲೆಯತ್ತ ಪಯಣ
ಕೋವಿಡ್ ಸಾಂಕ್ರಾಮಿಕದ ಕಾರಣ 18 ತಿಂಗಳುಗಳ ದೀರ್ಘ ಬಿಡುವಿನ ನಂತರ ಶಾಲೆಗಳು ಪುನರಾರಂಭಗೊಂಡಾಗ, ಶಾಲೆಗೆ ಹಿಂದಿರುಗುವುದನ್ನು ಉತ್ತೇಜಿಸುವುದಕ್ಕಾಗಿ ನಾವು ಬೇಸಿಗೆ ಶಿಬಿರಗಳನ್ನು ಆಯೋಜಿಸಿದೆವು. ರಾಜಸ್ಥಾನದ ಬಾರ್ಮೆರ್ ನ ಕೆಲವು ಇಣುಕು ನೋಟಗಳು ಇಲ್ಲಿವೆ.
ನಕ್ಷತ್ರಗಳು: ಅಸಾಧಾರಣ ಸರ್ಕಾರಿ ಶಾಲೆಗಳ ಶಿಕ್ಷಕರ ಕಥೆಗಳು | ಸತ್ಯನಾರಾಯಣ, ಸಿರೋಹಿ
ಅಜೀಂ ಪ್ರೇಮ್ಜಿ ವಿಶ್ವವಿದ್ಯಾಲಯದ ʻನಕ್ಷತ್ರಗಳುʼ ಎಂಬ ಪಾಡ್ ಕಾಸ್ಟ್ ಸರಣಿಯು, ತಮ್ಮ ವಿದ್ಯಾರ್ಥಿಗಳಿಗಾಗಿ ಮರುರೂಪುಗೊಳ್ಳುತ್ತ, ಬದ್ಧತೆ ಮತ್ತು ಸಹಾನುಭೂತಿಯ ಭಾವದಿಂದ ಸಮರ್ಪಿಸಿಕೊಂಡ ಶಿಕ್ಷಕರ ಸಂಕಥನಗಳ ಸಂಕಲನವಾಗಿದೆ.
ಪರ್ವತ ಪ್ರದೇಶದಲ್ಲೊಂದು ಪುಸ್ತಕ ಮೇಳ | ಅಲ್ಮೋರಾ
ಪುಸ್ತಕಗಳ ಕಂತೆಯೊಂದು ಬೃಹತ್ ಪುಸ್ತಕ ಮೇಳವಾಗಿ ಬೆಳೆದು ಬಂದ ಕಥೆ
ಒಳ್ಳೆಯ ಶಾಲೆಗಳು: ಸರ್ಕಾರಿ ಪ್ರಾಥಮಿಕ ಶಾಲೆ, ಧಮ್ತರಿ, ಛತ್ತೀಸ್ಗಢ
ಈ ವಿಡಿಯೊ ಮೂಲಕ, ಛತ್ತೀಸ್ಗಢದ ಧಮ್ತರಿಯಲ್ಲಿರುವ ಸರ್ಕಾರಿ ಪ್ರಾಥಮಿಕ ಶಾಲೆಯು ಹೇಗೆ ನಿಜಕ್ಕೂ ಒಳಗೊಳ್ಳುವ ಮತ್ತು ಉತ್ತೇಜಕ ಕಲಿಕಾ ತಾಣವಾಗಿ ರೂಪುಗೊಂಡಿತು ಎಂಬುದನ್ನು ನಾವು ವಿವರಿಸಲಿದ್ದೇವೆ.