ಕಿರು ಪರಿಚಯಗಳು, ದಿನಚರಿಗಳು, ವೀಡಿಯೋಗಳು, ಸಂಭಾಷಣೆಗಳು: ಈ ವಿಭಾಗದಲ್ಲಿರುವ ಪ್ರತಿ ಅಂಶವೂ ನಾವು ಮತ್ತು ನಮ್ಮ ಕೆಲಸದತ್ತ ನಿಮ್ಮನ್ನು ಇನ್ನಷ್ಟು ಹತ್ತಿರಕ್ಕೆ ಸೆಳೆಯುತ್ತದೆ
ನಮ್ಮ ಮೂರು ಕಾರ್ಯಾಚರಣೆಯ ಘಟಕಗಳು (ಕ್ಷೇತ್ರ ಸಂಸ್ಥೆಗಳು, ಲೋಕೋಪಕಾರಿ ಘಟಕ ಮತ್ತು ವಿಶ್ವವಿದ್ಯಾಲಯಗಳು), ನ್ಯಾಯಯುತ, ಸಮಾನ, ಮಾನವೀಯ ಮತ್ತು ಸುಸ್ಥಿರ ಸಮಾಜದ ಸ್ಥಾಪನೆಗಾಗಿ ಕೊಡುಗೆ ನೀಡುವ ಫೌಂಡೇಷನ್ನ ಧ್ಯೇಯಕ್ಕೆ ಉತ್ತೇಜನ ನೀಡಲು ಏಕೀಕೃತ ರೀತಿಯಲ್ಲಿ ಕೆಲಸ ಮಾಡುತ್ತವೆ. ಭಾರತದಾದ್ಯಂತ ಇರುವ ನಮ್ಮ ಜನರು ಮತ್ತು ಪಾಲುದಾರರಿಂದ ನೇರವಾಗಿ ಈ ಮೂರು ಘಟಕಗಳ ಸಂಕಥನಗಳ ಸಂಗ್ರಹವನ್ನು ನಾವು ನಿಮ್ಮ ಮುಂದೆ ಪ್ರಸ್ತುತ ಪಡಿಸುತ್ತಿದ್ದೇವೆ. ವಿಡಿಯೊ, ಚಲಿಸುವ ಚಿತ್ರಗಳು (ಅನಿಮೇಶನ್), ಸಂದರ್ಶನಗಳು ಮತ್ತು ಜರ್ನಲ್ಗಳ ರೂಪದಲ್ಲಿರುವ ಈ ಸಂಕಥನಗಳು, ತಾನು ತೊಡಗಿಸಿಕೊಂಡಿರುವ ವಿವಿಧ ಕ್ಷೇತ್ರಗಳಲ್ಲಿ ಫೌಂಡೇಷನ್ನ ಪಯಣ ಹಾಗೂ ಇದು ಉಂಟು ಮಾಡಿರುವ ಪರಿಣಾಮಕ್ಕೆ ಕನ್ನಡಿ ಹಿಡಿಯುತ್ತವೆ.
ಗ್ರಾಮ ಸಭೆಗಳು ಮತ್ತು ವಿಪತ್ತು ನಿರ್ವಹಣೆ | ಲುಪುಂಗಪತ್
ಗುಮ್ಲಾ ಜಿಲ್ಲೆಯ ಲುಪುಂಗಪತ್ ಗ್ರಾಮದ ಗ್ರಾಮ ಸಭೆಯು COVID-19 ಸಮಯದಲ್ಲಿ ಸಕ್ರಿಯ ಮತ್ತು ಸಮುದಾಯವನ್ನು ಒಳಗೊಂಡ ನಿರ್ಧಾರಗಳನ್ನು ತೆಗೆದುಕೊಳ್ಳುವ ಮೂಲಕ ಅನೇಕ ಗ್ರಾಮಗಳಿಗೆ ಸ್ಫೂರ್ತಿಯಾಯಿತು. ಈ ಕಥನವು, ಸಮುದಾಯದ ಇಚ್ಛಾಶಕ್ತಿ, ಬದ್ಧತೆ ಮತ್ತು ಗ್ರಾಮ ಸಭೆಗಳು ಸಂಕಷ್ಟದ ಸಮಯದಲ್ಲಿ ಕಾರ್ಯಗಳನ್ನು ಸಾಧಿಸಬಲ್ಲವು ಎಂಬುದಕ್ಕೆ ಒಂದು ಸ್ಪಷ್ಟ ಉದಾಹರಣೆ.
ಗ್ರಾಮ ಸಭೆಗಳಲ್ಲಿ ಪಂಚಾಯತ್ನ ಪಾತ್ರ | ಆರ್ಯಾ ಪಂಚಾಯತ್
ಬಾಸಿಯಾ ಬ್ಲಾಕ್ನ (ಗುಮ್ಲಾ ಜಿಲ್ಲೆ) ಆರ್ಯಾ ಪಂಚಾಯತ್ನ ಮುಖ್ಯಸ್ಥರಾದ ಜಸಿಂತಾ ಬಾಗೆ, ತಮ್ಮ ಪಂಚಾಯತ್ ಅನ್ನು ಹೊಸ ದಿಕ್ಕುಗಳಲ್ಲಿ ಕೊಂಡೊಯ್ಯುತ್ತಿದ್ದಾರೆ. ಜಸಿಂತಾ ಪಂಚಾಯತ್ ಮತ್ತು ಗ್ರಾಮ ಸಭೆಯ ನಡುವೆ ಉತ್ತಮ ಸಮನ್ವಯವನ್ನು ಸಾಧಿಸಿದ್ದು, ಇದರಿಂದ ಆರ್ಯಾ ಜನರ ಸಮಸ್ಯೆಗಳು ಬೇಗ ಮತ್ತು ಪರಿಣಾಮಕಾರಿಯಾಗಿ ಪರಿಹಾರವಾಗುತ್ತಿವೆ.
ಲಸಿಕಾಂದೋಲನದ ಯಶೋಗಾಥೆಯಲ್ಲಿ ಮನೆ ಸಮೀಕ್ಷೆಯ ಪಾತ್ರ – ಉತ್ತರಾಖಂಡದಿಂದ COVID-19ರ ಕಥನಗಳು
ಈ ಚಿತ್ರಕಥೆಯು ಉತ್ತರಾಖಂಡದ ಲಸಿಕಾಂದೋಲನದ ಮುಂಚೂಣಿಯಲ್ಲದ್ದ ಇಪ್ಪತ್ತನಾಲ್ಕು ವೀರರ ಅನುಭವಗಳನ್ನು ತೋರಿಸುತ್ತದೆ. ರಾಜ್ಯದ ಎಲ್ಲರಿಗೂ ಲಸಿಕೆಗಳನ್ನು ನೀಡುವಲ್ಲಿ ಮನೆ ಸಮೀಕ್ಷೆಯ ಪ್ರಾಮುಖ್ಯತೆಯನ್ನು ತಿಳಿಯಿರಿ.
ಮಹಿಳಾ ಲಸಿಕಾ ಸೇನಾನಿಗಳು: ರಾಜಸ್ಥಾನದಿಂದ COVID-19 ಕಥೆಗಳು
ಈ ಛಾಯಾಚಿತ್ರ ಕಥನವು ರಾಜಸ್ಥಾನದ ಲಸಿಕಾ ಅಭಿಯಾನದಲ್ಲಿ ಭಾಗವಹಿಸಿದ ಹನ್ನೊಂದು ಮಹಿಳಾ ಮುಂಚೂಣಿ ಹೀರೋಗಳ ಅನುಭವಗಳನ್ನು ತೋರಿಸುತ್ತದೆ.
ಮೋರಿಯಲ್ಲಿ ಲಸಿಕಾ ಅಭಿಯಾನ: ಮೇಲಕ್ಕೇರುವುದು
ಭಾರತದಲ್ಲಿ ಕೋವಿಡ್ ಲಸಿಕಾ ಕಾರ್ಯಕ್ರಮಕ್ಕೆ ನೆರವು ಒದಗಿಸುವ ನಮ್ಮ ಕಾರ್ಯದ ಭಾಗವಾಗಿ ಮುಖ್ಯವಾಗಿ ನಾವು ಅಸ್ತಿತ್ವದಲ್ಲಿರುವ ದೂರದ ಮತ್ತು ಹಿಂದುಳಿದ ಜಿಲ್ಲೆಗಳಲ್ಲಿ ಸವಾಲುಗಳನ್ನು ಮೆಟ್ಟಿ ನಿಲ್ಲಬೇಕಾಯಿತು. ಆ ಕಾಲದ ಹೇಳಿಕೊಳ್ಳದ ಒಂದು ಕಥೆ ಇಲ್ಲಿದೆ.
ವೈದ್ಯರೊಬ್ಬರ ಅನುಭವ: ರಾಜಸ್ಥಾನದಿಂದ ಕೋವಿಡ್ – 19 ಕಥೆಗಳು
ʻಭಾರತದಲ್ಲಿ ಕೋವಿಡ್ - 19 ದಾಖಲೀಕರಣʼ ಸರಣಿಯ ಒಂದು ಭಾಗ
ಪತ್ರಕರ್ತರ ಅನುಭವ: ರಾಜಸ್ಥಾನದಿಂದ ಕೋವಿಡ್ – 19 ಕಥೆಗಳು
ಈ ಕಥನದಲ್ಲಿ ನಾವು ದೇಶದಾದ್ಯಂತ ನಿರ್ಭೀತಿಯಿಂದ ಕೆಲಸ ಮಾಡಿದ ಪತ್ರಕರ್ತರು ಮತ್ತು ಚಿತಾಗಾರದ ಕಾರ್ಮಿಕರಿಗೆ ಗೌರವ ಸಲ್ಲಿಸುತ್ತೇವೆ.
ಭಾರತದಲ್ಲಿ ಕೋವಿಡ್ – 19 ದಾಖಲೀಕರಣ | ಕಲಬುರಗಿಯ ಕಥೆ
ಇದು ಕರ್ನಾಟಕದ ಕಲಬುರಗಿ ಜಿಲ್ಲೆಯ ಮೊದಲ ಸಚಿತ್ರ ವರದಿಯಾಗಿದೆ: ಮಾನವೀಯ ಬಿಕ್ಕಟ್ಟು, ಉಂಟಾದ ವಿನಾಶ, ಮತ್ತು ಕಷ್ಟಸಾಧ್ಯವಾದ ಪ್ರತಿಕ್ರಿಯೆಯನ್ನು ಇದು ಬಿಂಬಿಸುತ್ತದೆ.