ಮೂಲಪುಟ » ನಾವು ಏನು ಮಾಡುತ್ತೇವೆ » ಆರೋಗ್ಯ » ಕೋವಿಡ್ -19 ಸ್ಪಂದನೆ
ಕೋವಿಡ್ -19 ಸ್ಪಂದನೆ

ಮೂಲಪುಟ » ನಾವು ಏನು ಮಾಡುತ್ತೇವೆ » ಆರೋಗ್ಯ » ಕೋವಿಡ್ -19 ಸ್ಪಂದನೆ
ಈ ಬಿಕ್ಕಟ್ಟು ಹಲವು ಅಲೆಗಳ ರೂಪದಲ್ಲಿ ಮುಂದುವರಿದಂತೆ ಕಡುಬಡವರು ಹಾಗೂ ಸಮಾಜದಲ್ಲಿ ಅತ್ಯಂತ ಅಂಚಿಗೆ ತಳ್ಳಲ್ಪಟ್ಟವರು ಅತಿ ಹೆಚ್ಚಿನ ರೀತಿಯಲ್ಲಿ ಅವಕಾಶಗಳಿಂದ ವಂಚಿತರಾದರು.
ಅಜೀಂ ಪ್ರೇಮ್ಜಿ ಫೌಂಡೇಷನ್ ಮತ್ತು ವಿಪ್ರೊ ಇವೆರಡೂ ಜೊತೆಯಾಗಿ ನಾಗರಿಕ ಸಮಾಜದ ಸ್ಪಂದನೆಗೆ ಬೆಂಬಲ ನೀಡಲು ಹಾಗೂ ಈ ಪಿಡುಗಿಗೆ ಪ್ರತಿಸ್ಪಂದಿಸಲು ಪ್ರಯತ್ನಗಳನ್ನು ಆರಂಭಿಸಿದವು.
ಈ ಪಿಡುಗಿಗೆ ನಮ್ಮ ಸಮಗ್ರ ಸ್ಪಂದನೆಯು ಈ ಬಿಕ್ಕಟ್ಟಿನ ಬೇರ್ಪಡಿಸಲಾರದ ಎರಡು ಆಯಾಮಗಳಾದ ಆರೋಗ್ಯ ಮತ್ತು ಮಾನವೀಯ ನೆಲೆಯಲ್ಲಿತ್ತು.
ಈ ಪ್ರಯತ್ನಕ್ಕೆ ನಮ್ಮದೇ ಸಂಸ್ಥೆಯ ಸದಸ್ಯರ, ಪಾಲುದಾರರ, ನಾವು ಜೊತೆಯಾಗಿ ಕೆಲಸ ಮಾಡುತ್ತಿರುವ ಸರಕಾರಿ ಶಾಲೆಗಳ ಶಿಕ್ಷಕರ ಹಾಗೂ ಅಜೀಂ ಪ್ರೇಮ್ಜಿ ವಿಶ್ವವಿದ್ಯಾಲಯದ ಹಿರಿಯ ವಿದ್ಯಾರ್ಥಿಗಳ ಬೆಂಬಲವಿತ್ತು.
ವಿಪ್ರೊದ ತಾಂತ್ರಿಕ ಪರಿಣತಿ ಹಾಗೂ ವಿತರಣಾ ವ್ಯಾಪ್ತಿಯ ಬೆಂಬಲವಿದ್ದ ಈ ಜಾಲದೊಂದಿಗೆ ನಾವು ರಾಜ್ಯಗಳ 83 ಲಕ್ಷಕ್ಕೂ ಹೆಚ್ಚು ಜನರಿಗೆ ಜೀವನೋಪಾಯದ ಮರುಸೃಷ್ಟಿ, ಆಹಾರ ಸಾಮಗ್ರಿ, ಒಣ ಪಡಿತರ ಸಾಮಗ್ರಿ, ಹಾಗೂ ವೈಯಕ್ತಿಕ ಶುಚಿತ್ವದ ಕಿಟ್, ಇವುಗಳಿಗೆ ಬೆಂಬಲ ನೀಡುವುದು ಸಾಧ್ಯವಾಯಿತು.
ಇತ್ತೀಚೆಗೆ ನವೀಕರಿಸಲಾದ ಮಾಹಿತಿ ಓದಲು ಇಲ್ಲಿ ಕ್ಲಿಕ್ ಮಾಡಿ
ಮಾರ್ಚ್ 2020 ರಿಂದ ಜೂನ್ 15, 2021 ರ ಅವಧಿಯವರೆಗಿನ ಸಮಗ್ರ ವರದಿಯ ಸಾರಾಂಶವನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
ನಮ್ಮ ಸಮಗ್ರ ಆರೋಗ್ಯ ಪ್ರತಿಸ್ಪಂದನೆಯನ್ನು ಆಯ್ದ ಪ್ರದೇಶಗಳ ಮುಂಚೂಣಿ ಕಾರ್ಯವನ್ನು ಬಲಪಡಿಸುವತ್ತ, ಪರೀಕ್ಷಾ ಸಾಮರ್ಥ್ಯವನ್ನು ಹೆಚ್ಚಿಸುವತ್ತ ಹಾಗೂ ಚಿಕಿತ್ಸಾ ಸೌಕರ್ಯಗಳ ಬಲವರ್ಧನೆಯತ್ತ ಕೇಂದ್ರೀಕರಿಸುವಂತೆ ವೃದ್ಧಿಸಲಾಯಿತು. ಪುಣೆಯಲ್ಲಿರುವ ವಿಪ್ರೊದ ಕ್ಯಾಂಪಸ್ ಒಂದನ್ನು 450-ಹಾಸಿಗೆಗಳ ಮಧ್ಯಮ ಆರೈಕೆಯ ಕೋವಿಡ್–19 ಆಸ್ಪತ್ರೆಯಾಗಿ ಮರುರೂಪಿಸಲಾಯಿತು.
ಈ ಕಥನಗಳು ಕಾರ್ಯಕ್ಷೇತ್ರ, ಲೋಕೋಪಕಾರ, ವಿಶ್ವವಿದ್ಯಾಲಯ, ಹಾಗೂ ನಮ್ಮೆಲ್ಲ ಪಾಲುದಾರರು – ಹೀಗೆ ಫೌಂಡೇಷನ್ ಉದ್ದಗಲಕ್ಕೂ ಕೋವಿಡ್-19 ಬಿಕ್ಕಟ್ಟಿಗೆ ಸ್ಪಂದಿಸಿ ನಾವು ಮಾಡಿರುವ ಕೆಲಸಗಳ ಸಾರವನ್ನು ನಿಮ್ಮ ಮುಂದಿಡುತ್ತವೆ.
ತಳಮಟ್ಟದ ಜನರ ಕಣ್ಣು, ಕಿವಿ ಹಾಗೂ ಭಾವನೆಗಳ ಮೂಲಕ ಭಾರತದಲ್ಲಿನ ಕೋವಿಡ್-19 ಸ್ಥಿತಿ-ಗತಿಗಳನ್ನು ದಾಖಲಿಸಿದ್ದು, ಕಲಬುರಗಿಯೊಂದಿಗೆ ಆರಂಭವಾಗುವ ಸರಣಿಗಾಗಿ ಇಲ್ಲಿ ಕ್ಲಿಕ್ ಮಾಡಿ.
ಜಾರ್ಖಂಡ್ ನಲ್ಲಿ ಸಮುದಾಯ ಕೇಂದ್ರಿತ ಆರೋಗ್ಯ ಸ್ಪಂದನೆಯನ್ನು ಆಯೋಜಿಸಿದ ಜಿಧಾನ್ (JIDHAN), ಅಥವಾ ಕೋವಿಡ್ ಚಿಕಿತ್ಸಾ ಕೇಂದ್ರಗಳ ಬಲಪಡಿಸುವಿಕೆ ಮತ್ತು ಮಹಾನಗರದಲ್ಲಿ ಸ್ಪಂದಿಸುವುದು ಇವುಗಳ ಕುರಿತಾದ ನಮ್ಮ ಕ್ಷೇತ್ರ ಟಿಪ್ಪಣಿಗಳನ್ನು ಓದಿ. ಇಲ್ಲವೇ ತಪಾಸಣಾ ಸಾಮರ್ಥ್ಯವನ್ನು ಹೆಚ್ಚಿಸುವುದು, ಹಾಗೂ ಮುಂಚೂಣಿಯ ಶಾಲಾ ಶಿಕ್ಷಕರು, ಅಥವಾ ಜಾರ್ಖಂಡ್ ನ ಚಚಲಿ ಹಳ್ಳಿಯ ಸಮುದಾಯ–ಪ್ರೇರಿತ ಪ್ರತಿಕ್ರಿಯೆ, ಹಾಗೂ ಇತರ ಪ್ರದೇಶಗಳಲ್ಲಿ ಕೋವಿಡ್ ಆರೋಗ್ಯ ಉಪಕ್ರಮಗಳು– ಇವುಗಳ ಕುರಿತು ಓದಿ.
ರವಾನೆಯನ್ನು ಸಹ ನೋಡಿ ಮತ್ತು ಮಿಶನ್ ಮಾಕುಂದದ ಕುರಿತು ಓದಿ –ಅಸ್ಸಾಂ ರಾಜ್ಯದ ಮೂಲೆಯಲ್ಲಿರುವ ಆಸ್ಪತ್ರೆಯೊಂದರ ಪರಿವರ್ತನೆಯ ಕಥೆ, ಹಾಗೂ ಈ ಹಿಂದಿನ ಸಂಚಿಕೆಗಳು 5 (ಇಂಗ್ಲಿಷ್), 5 (ಕನ್ನಡ), 4, 3, 2 ಮತ್ತು 1
ಬೆಂಗಳೂರಿನ ಸಮಗ್ರ ಆರೋಗ್ಯ ಸ್ಪಂದನೆ ಹಾಗೂ ಮಾನವೀಯ ನೆರವು ಮತ್ತು ಆನೇಕಲ್ ತಾಲೂಕಿನ ಮಾನವೀಯ ಹಾಗೂ ಲಸಿಕಾ ಪ್ರಯತ್ನಗಳು ಇವುಗಳ ಬಗೆಗಿನ ಛಾಯಾಚಿತ್ರ ಪ್ರಬಂಧಗಳು ಇಲ್ಲಿವೆ.
ಸಮುದಾಯ, ಪಂಚಾಯತಿ ಹಾಗೂ ಜಿಲ್ಲಾಮಟ್ಟಗಳಲ್ಲಿ ಶಾಲೆಗಳ ಪುನರಾರಂಭಕ್ಕಾಗಿ, ಆರೋಗ್ಯ ರಕ್ಷಣೆ ಹಾಗೂ ಮಾನವೀಯ ಬೆಂಬಲಕ್ಕಾಗಿ ಕಿರುಹೊತ್ತಿಗೆಗಳು ಮತ್ತು ಚೆಕ್ಲಿಸ್ಟ್ ಗಳು.
ಹಿಂದಿ ಮತ್ತು ಕನ್ನಡದಲ್ಲಿ ತಿಳುವಳಿಕೆ ಸಾಮಗ್ರಿಗಳು
ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ
ಕೋವಿಡ್-19 ಕ್ಕೆ ಸಂಬಂಧಿಸಿದ ಲಾಕ್ಡೌನ್ ಸಮಯದಲ್ಲಿ, ನಗರ ಪ್ರದೇಶದಲ್ಲಿ ಶೇ.80ರಷ್ಟು ಜನರು ಹಾಗೂ ಗ್ರಾಮೀಣ ಪ್ರದೇಶದ ಶೇ.57ರಷ್ಟು ಜನರು ಉದ್ಯೋಗ ಕಳೆದುಕೊಂಡರು. ಮಧ್ಯ ಭಾರತದ ಹಲವು ಪ್ರದೇಶಗಳು ಆಹಾರ ಹಾಗೂ ನೀರಿನ ಅಭದ್ರತೆಯ ಬವಣೆ ಎದುರಿಸಿದವು. ಹಿಂದಿರುಗಿದ ವಲಸೆಗಾರರಲ್ಲಿ ಕೇವಲ ಶೇ.20 ರಿಂದ 50ರಷ್ಟು ವಾಪಸಾದ ವಲಸಿಗರು ಯಾವುದೋ ಒಂದು ರೀತಿಯ ಆದಾಯದ ಮೂಲವನ್ನು ಹೊಂದಿದ್ದರು. ನಾವು ಗ್ರಾಮೀಣ ಸಮುದಾಯವನ್ನು ಮತ್ತೆ ಕಟ್ಟುವುದು ಹೇಗೆ ಹಾಗೂ ನಗರಗಳನ್ನು ಮರುವಿನ್ಯಾಸ ಮಾಡುವುದು ಹೇಗೆ? ಇನ್ನೂ ಹೆಚ್ಚಿಗೆ ಓದಲು …ಇಲ್ಲಿ ಕ್ಲಿಕ್ ಮಾಡಿ
ಅಜೀಂ ಪ್ರೇಮ್ಜಿ ಯೂನಿವರ್ಸಿಟಿಯ ಸಾಮಾಜಿಕ ಉದ್ಯಮ ಕೋಶವು ಆಯೋಜಿಸಿದ ಸೋಶಿಯಲ್ ಎಂಟರ್ಪ್ರೈಸ್ ಐಡಿಯ ಚಾಲೆಂಜ್ ನ ಭಾಗವಾಗಿದ್ದ ಒಂದು ಪ್ರಯತ್ನ, ’ಕೋವಿಡ್-19 ಬಿಕ್ಕಟ್ಟಿಗೆ ಸ್ಪಂದನೆ’ ಎನ್ನುವುದಾಗಿತ್ತು. ವಿಜೇತರಿಗೆ ಅಭಿನಂದನೆಗಳು!