ಅಜೀಂ ಪ್ರೇಮ್ಜಿ ಸ್ಕಾಲರ್ಶಿಪ್
ವಿದ್ಯಾರ್ಥಿನಿಯರು ತಮ್ಮ ಕಾಲೇಜು ಶಿಕ್ಷಣವನ್ನು ಮುಂದುವರಿಸಲು ಬೆಂಬಲ ನೀಡುವ ಉಪಕ್ರಮ.
ಸ್ಕಾಲರ್ಶಿಪ್ ಪೋರ್ಟಲ್ ಗೆ ಲಾಗಿನ್ ಆಗಲು ಇಲ್ಲಿ ಕ್ಲಿಕ್ ಮಾಡಿರಿ.
ಎಲ್ಲ ಅರ್ಜಿದಾರರ ಗಮನಕ್ಕೆ:
- ನಿಮ್ಮ ಅರ್ಜಿಗಳು ಪ್ರಸ್ತುತ ಪರಿಶೀಲನೆಯ ಹಂತದಲ್ಲಿವೆ.
- ಹೆಚ್ಚುವರಿ ದಾಖಲೆಗಳನ್ನು ಸಲ್ಲಿಸಬೇಕಾದ ಅಥವಾ ಮರುಸಲ್ಲಿಕೆ ಮಾಡಬೇಕಾದ ಸಂದರ್ಭದಲ್ಲಿ, ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಗೆ ಎಸ್ಎಂಎಸ್ ಮೂಲಕ ಮಾತ್ರವೇ ನಿಮಗೆ ತಿಳಿಸಲಾಗುವುದು. ಆದ್ದರಿಂದ, ನಿಮ್ಮ ಮೊಬೈಲ್ ಸಂಖ್ಯೆಯನ್ನು ಸ್ಕಾಲರ್ಶಿಪ್ ಪೋರ್ಟಲ್ನಲ್ಲಿ ನೋಂದಾಯಿಸುತ್ತಿರಿ.
- ಮರುಸಲ್ಲಿಕೆಗೆ ಸಂಬಂಧಿಸಿದ ಎಸ್ಎಂಎಸ್ ಬಂದ 14 ದಿನಗಳೊಳಗೆ (ರಜಾದಿನಗಳು, ಶನಿವಾರ ಮತ್ತು ಭಾನುವಾರ ಸೇರಿದಂತೆ) ನಿಮ್ಮ ಸರಿಯಾದ ದಾಖಲೆಗಳನ್ನು ಸ್ಕಾಲರ್ಶಿಪ್ ಪೋರ್ಟಲ್ ನಲ್ಲಿ ಮರುಸಲ್ಲಿಕೆ ಮಾಡಬೇಕು.
- ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ಕೆಳಗೆ ನೀಡಲಾದ ʻದಾಖಲೆಗಳನ್ನು ಹೇಗೆ ಮರುಸಲ್ಲಿಸಬೇಕುʼ ವಿಭಾಗವನ್ನು ಓದಿರಿ.
ಅಜೀಂ ಪ್ರೇಮ್ಜಿ ಸ್ಕಾಲರ್ಶಿಪ್, ಭಾರತದ ಶಿಕ್ಷಣದಲ್ಲಿ ಗುಣಮಟ್ಟ ಮತ್ತು ಸಮತೆಯನ್ನು ಸುಧಾರಿಸುವ ನಿಟ್ಟಿನಲ್ಲಿ ಅಜೀಂ ಪ್ರೇಮ್ಜಿ ಫೌಂಡೇಷನ್ ಹೊಂದಿರುವ ಬದ್ಧತೆಯ ಒಂದು ಅಂಗವಾಗಿದೆ. ಈ ಸ್ಕಾಲರ್ಶಿಪ್, ಅವಕಾಶವಂಚಿತ ಹಿನ್ನಲೆಯುಳ್ಳ ವಿದ್ಯಾರ್ಥಿನಿಯರಿಗೆ ಕಾಲೇಜು ಶಿಕ್ಷಣವನ್ನು ಮುಂದುವರಿಸಲು ನೆರವು ನೀಡುವ ಉದ್ದೇಶವನ್ನು ಹೊಂದಿದೆ.
ಒಬ್ಬ ವಿದ್ಯಾರ್ಥಿಯು, ಅದರಲ್ಲೂ ವಿಶೇಷವಾಗಿ ವಿದ್ಯಾರ್ಥಿನಿಯು, ಪ್ರಾಥಮಿಕ ಹಂತದಿಂದ ಪ್ರೌಢ ಹಂತಕ್ಕೆ ಬಂದಾಗ ಶಿಕ್ಷಣದ ಅವಕಾಶಗಳು ಕಡಿಮೆಯಾಗುವುದಲ್ಲದೆ ದುಸ್ತರವೂ ಆಗುತ್ತದೆ. ಉನ್ನತ ಶಿಕ್ಷಣದ ಹಂತದಲ್ಲಿ ಈ ಸವಾಲು ಮತ್ತೂ ದೊಡ್ಡದಾಗುತ್ತದೆ. ಶಿಕ್ಷಣ ಸಂಸ್ಥೆಗೆ ಇರುವ ದೂರ, ಸಾಮಾಜಿಕ ಕಟ್ಟಳೆಗಳು ಮತ್ತು ಆರ್ಥಿಕ ಇತಿಮಿತಿಗಳು ಸೇರಿದಂತೆ ಇದಕ್ಕೆ ಹಲವು ಕಾರಣಗಳಿವೆ.
ಆರ್ಥಿಕ ಇತಿಮಿತಿಗಳಿಂದಾಗಿ ಕಾಲೇಜು ಶಿಕ್ಷಣದ ಅವಕಾಶಗಳನ್ನು ಬಳಸಿಕೊಳ್ಳಲು ಕಷ್ಟಸಾಧ್ಯವಾಗಿರುವ ವಿದ್ಯಾರ್ಥಿನಿಯರಿಗೆ ನೆರವಾಗುವಂತೆ ಅಜೀಂ ಪ್ರೇಮ್ಜಿ ಸ್ಕಾಲರ್ಶಿಪ್ ಅನ್ನು ವಿನ್ಯಾಸಗೊಳಿಸಲಾಗಿದೆ
ಶೈಕ್ಷಣಿಕ ವರ್ಷ 2024-25ರ ಗುಂಪಿಗೆ ಅರ್ಜಿಗಳನ್ನು ಸ್ವೀಕರಿಸುವುದನ್ನು ಈಗ ನಿಲ್ಲಿಸಲಾಗಿದೆ.
- ಈ ಬಾರಿ ನಾವು ಸರ್ಕಾರಿ ಶಾಲೆಯಲ್ಲಿ 10 ಮತ್ತು 12ನೇ ತರಗತಿಗಳನ್ನು ಓದಿ, ಸರ್ಕಾರಿ ಅಥವಾ ಉತ್ತಮ ಖಾಸಗಿ ಕಾಲೇಜು / ವಿಶ್ವವಿದ್ಯಾಲಯದಲ್ಲಿ ಸಾಮಾನ್ಯ ಪದವಿ ಅಥವಾ ಡಿಪ್ಲೊಮಾ ಕಾರ್ಯಕ್ರಮಕ್ಕೆ ಪ್ರವೇಶ ಪಡೆದ ವಿದ್ಯಾರ್ಥಿನಿಯರಿಗೆ ನೆರವು ನೀಡುತ್ತೇವೆ (ಹೆಚ್ಚಿನ ವಿವರಗಳನ್ನು ಕೆಳಗೆ ನೀಡಲಾಗಿದೆ).
- ಆಯ್ದ ವಿದ್ಯಾರ್ಥಿನಿಯರಿಗೆ, ಪದವಿ ಕೋರ್ಸ್ / ಕಾರ್ಯಕ್ರಮದ ಸಂಪೂರ್ಣ ಅವಧಿಗೆ (ಎರಡು, ಮೂರು, ನಾಲ್ಕು ಅಥವಾ ಐದು ವರ್ಷಗಳು) ವಾರ್ಷಿಕ ರೂ. 30,000 ದಷ್ಟು ವಿದ್ಯಾರ್ಥಿವೇತನವನ್ನು ನೀಡಲಾಗುವುದು. ಈ ಮೊತ್ತವನ್ನು ಬೋಧನಾ ಶುಲ್ಕ ಅಥವಾ ತಮ್ಮ ಶಿಕ್ಷಣವನ್ನು ಪೂರ್ಣಗೊಳಿಸುವಾಗ ಉಂಟಾಗುವ ಯಾವುದೇ ಇತರ ವೆಚ್ಚಗಳನ್ನು ಭರಿಸುವುದಕ್ಕಾಗಿ ಬಳಸಬಹುದು.
- ಈ ವರ್ಷದಲ್ಲಿ, ಈ ಸ್ಕಾಲರ್ಶಿಪ್ ಅನ್ನು ʼಪೈಲಟ್ʼ ಹಂತದಲ್ಲಿ ಕೆಲವೇ ಕೆಲವು ಪ್ರದೇಶಗಳಲ್ಲಿ ಮಾತ್ರ ಪ್ರಾರಂಭಿಸಲಾಗುವುದು. ಸದ್ಯದಲ್ಲೇ ಇದನ್ನು ಇಡೀ ದೇಶಕ್ಕೆ ವಿಸ್ತರಿಸಲಾಗುವುದು. ಈ ವರ್ಷಕ್ಕೆ, ಅರ್ಜಿದಾರರು ರಾಜಸ್ಥಾನ ಮತ್ತು ಉತ್ತರ ಪ್ರದೇಶದ ಅಯ್ದ ಜಿಲ್ಲೆಗಳಿಂದ (ಈ ಜಿಲ್ಲೆಗಳ ಪಟ್ಟಿಯನ್ನು ನಮ್ಮ ವೆಬ್ಸೈಟ್ನಲ್ಲಿ ಪ್ರಕಟಿಸಲಾಗುವುದು) ಅಥವಾ ಮಧ್ಯಪ್ರದೇಶದಿಂದ ತಮ್ಮ 12 ನೇ ತರಗತಿಯನ್ನು ಪೂರ್ಣಗೊಳಿಸಿರಬೇಕು.
ಈ ಕೆಳಗಿನ ಅರ್ಹತೆಗಳನ್ನು ಹೊಂದಿರುವ, ಮಧ್ಯ ಪ್ರದೇಶದ ಎಲ್ಲ ವಿದ್ಯಾರ್ಥಿನಿಯರು, ರಾಜಾಸ್ಥಾನ ಮತ್ತು ಉತ್ತರ ಪ್ರದೇಶ ರಾಜ್ಯಗಳ ಆಯ್ದ ಜಿಲ್ಲೆಗಳ* ವಿದ್ಯಾರ್ಥಿನಿಯರು, ಅಥವಾ ಝಾರ್ಖಂಡ್ ರಾಜ್ಯದ ರಾಂಚಿ ಜಿಲ್ಲಯ ಇಟ್ಕೀ ಬ್ಲಾಕ್ನ ವಿದ್ಯಾರ್ಥಿನಿಯರು.
- ಸ್ಥಳೀಯ ಸರ್ಕಾರಿ ಶಾಲೆಯಿಂದ 10ನೇ ತರಗತಿಯನ್ನು ಪೂರ್ಣಗೊಳಿಸಿರಬೇಕು.
- ಶೈಕ್ಷಣಿಕ ವರ್ಷ 2023-24ರಲ್ಲಿ ಅಥವಾ ಅದಕ್ಕೆ ಮುಂಚೆ ಸರಕಾರಿ ಶಾಲೆಯೊಂದರಿಂದ (ಸಾಮಾನ್ಯ/ಮುಕ್ತ) 12ನೇ ತರಗತಿಯಲ್ಲಿ ತೇರ್ಗಡೆಯಾಗಿರಬೇಕು; ಮತ್ತು
- ಅರ್ಜಿ ಸಲ್ಲಿಸುವ ಸಮಯದಲ್ಲಿ, ಸರ್ಕಾರಿ ಅಥವಾ ಒಂದು ಉತ್ತಮ ಖಾಸಗಿ ಕಾಲೇಜು ಅಥವಾ ವಿಶ್ವವಿದ್ಯಾಲಯದ ಪದವಿ ಕಾರ್ಯಕ್ರಮ ಅಥವಾ ಡಿಪ್ಲೊಮಾ ಕೋರ್ಸಿನ ಮೊದಲ ವರ್ಷಕ್ಕೆ ಸಾಮಾನ್ಯ ವಿದ್ಯಾರ್ಥಿಯಾಗಿ ಪ್ರವೇಶ ಪಡೆದಿರಬೇಕು.
*ಆಯ್ದ ಜಿಲ್ಲೆಗಳ ಪಟ್ಟಿ
ರಾಜಸ್ಥಾನ (22 ಜಿಲ್ಲೆಗಳು)
ಅಜ್ಮೀರ್, ಅಲ್ವರ್, ಬಲೋತ್ರಾ, ಬಾಂನ್ಸ್ವಾಡಾ, ಬಾರಾಂ, ಬಾಡ್ಮೇರ್, ಚಿತ್ತೋಡ್ಗಢ್, ದುಡು, ಡುಂಗರ್ಪುರ್, ಜೈಪುರ್, ಜೈಪುರ್ (ಗ್ರಾಮೀಣ), ಜಾಲೌರ್, ಝಾಲಾವಾಡ್, ಜೋಧ್ಪುರ್, ಕೇಕ್ಡಿ, ಪಾಲಿ, ಪ್ರತಾಪ್ಗಢ್, ರಾಜ್ಸಮಂದ್, ಸಾಲುಂಬರ್, ಸವಾಯಿ ಮಾಧೋಪುರ್, ಸಿರೋಹಿ, ಟೋಂಕ್ ಮತ್ತು ಉದಯಪುರ್
ಉತ್ತರ ಪ್ರದೇಶ (35 ಜಿಲ್ಲೆಗಳು)
ಅಂಬೇಡ್ಕರ್ ನಗರ್, ಅಮೇಥಿ, ಅಯೋಧ್ಯೆ (ಹಿಂದಿನ ಫೈಜಾಬಾದ್) ್, ಅಜಂಗಢ್, ಬಹರಾಇಚ್, ಬಲಿಯಾ, ಬಲರಾಂಪುರ್, ಬಾಂದಾ, ಬಾರಾಬಂಕಿ, ಬಸ್ತಿ, ಚಂದೌಲಿ, ಚಿತ್ರಕೂಟ, ದೇವರಿಯ, ಫತೇಪುರ್, ಗಾಜಿಪುರ್, ಗೊಂಡಾ, ಗೋರಖ್ಪರ್, ಜೌನ್ಪುರ್, ಕೌಶಾಂಬಿ, ಕುಶಿನಗರ್, ಲಖನೋ, ಮಹರಾಜ್ಗಂಜ್, ಮವೂ, ಮಿರ್ಜಾಪುರ್, ಪ್ರಯಾಗ್ರಾಜ್ (ಹಿಂದಿನ ಅಲಹಾಬಾದ್), ಪ್ರತಾಪ್ ಗಢ್, ರಾಯ್ಬರೇಲಿ, ಸಂತ್ ಕಬೀರ್ ನಗರ್, ಸಂತ್ ರವಿದಾಸ್ ನಗರ್ (ಹಿಂದಿನ ಭದೋಹಿ), ಶ್ರಾವಸ್ತಿ, ಸಿದ್ಧಾರ್ಥ್ನಗರ್, ಸೀತಾಪುರ್, ಸೋನ್ಭದ್ರ, ಸುಲ್ತಾನ್ಪುರ್, ಮತ್ತು ವಾರಣಾಸಿ
ಅರ್ಜಿಯನ್ನು ಪೂರ್ಣಗೊಳಿಸಲು ಅರ್ಜಿದಾರರು ಈ ಕೆಳಗಿನ ದಾಖಲೆಗಳನ್ನು ಹೊಂದಿರಬೇಕು:
- X ಮತ್ತು XII ನೇ ತರಗತಿಯ ಅಂಕಪಟ್ಟಿಗಳ ಮೂಲಪ್ರತಿಗಳು
- ಆಧಾರ್ ಕಾರ್ಡ್ನ ಮೂಲಪ್ರತಿ
- ಕಾಲೇಜಿಗೆ ಪ್ರವೇಶ ಪಡೆದಿರುವುದಕ್ಕೆ ಸಾಕ್ಷಿಯಾಗಿ ಈ ಕೆಳಗಿನ ಮೂರರಲ್ಲಿ ಒಂದು ದಾಖಲೆ – (ತಾತ್ಕಾಲಿಕ) ಪ್ರವೇಶ ಪ್ರಮಾಣ ಪತ್ರ ಅಥವಾ ವಿಶ್ವಾಸಾರ್ಹ ಪ್ರಮಾಣಪತ್ರ ಅಥವಾ ಶುಲ್ಕ ರಸೀತಿ
(ಸೂಚನೆ: ಎಲ್ಲ ದಾಖಲೆಗಳೂ ಕಂಪ್ಯೂಟರ್ನಿಂದ ರಚಿಸಲ್ಪಟ್ಟಿರಬೇಕು ಅಥವಾ ವಿಶ್ವವಿದ್ಯಾಲಯ ಅಥವಾ ಕಾಲೇಜಿನ ಅಧಿಕೃತ ಕಾಗದದ ಮೇಲೆ ಮುದ್ರಿಸಲ್ಪಟ್ಟಿರಬೇಕು)
- ಸರಳ ಹಿನ್ನೆಲೆಯುಳ್ಳ ಪಾಸ್ಪೋರ್ಟ್ ಗಾತ್ರದ ಭಾವಚಿತ್ರ (ಭಾವಚಿತ್ರವನ್ನು ಕಳೆದ 6 ತಿಂಗಳ ಒಳಗೆ ತೆಗೆದಿರಬೇಕು)
- ಚಾಲ್ತಿಯಲ್ಲಿರುವ ಮೊಬೈಲ್ ಸಂಖ್ಯೆ
ಒಂದು ವೇಳೆ ದಾಖಲೆಗಳನ್ನು ಅಗತ್ಯತೆಗಳಿಗೆ ತಕ್ಕುದಾಗಿ ಸಲ್ಲಿಸದೆ ಇದ್ದಲ್ಲಿ, ಅರ್ಜಿದಾರರು, ʻʻನಿಮ್ಮ ಅರ್ಜಿಯನ್ನು ಪೂರ್ಣಗೊಳಿಸಲು, ಕೆಲವು ದಾಖಲೆಗಳನ್ನು ಮರುಸಲ್ಲಿಸಬೇಕಿದೆ. ನಿಮ್ಮ ಅರ್ಜಿಯು ತಿರಸ್ಕಾರಗೊಳ್ಳುವುದನ್ನು ತಪ್ಪಿಸಲು, 2 ವಾರಗಳೊಳಗೆ ನಮ್ಮ ವೆಬ್ ಸೈಟ್ಗೆ ಭೇಟಿ ನೀಡಿ,ನಿಮ್ಮ ಅಕೌಂಟ್ಗೆ ಲಾಗಿನ್ ಆಗಿ, ಅಗತ್ಯವಿರುವ ದಾಖಲೆಗಳನ್ನು ಸಲ್ಲಿಸಿ – ಅಜೀಂ ಪ್ರೇಮ್ಜಿ ಸ್ಕಾಲರ್ಶಿಪ್.” ಎಂಬ ಎಸ್ಎಂಎಸ್ ಅನ್ನು ಪಡೆಯುತ್ತಾರೆ.
ತಮ್ಮ ಅರ್ಜಿಯು ತಿರಸ್ಕಾರಗೊಳ್ಳುವುದನ್ನು ತಪ್ಪಿಸಲು, ಅರ್ಜಿದಾರರು, ಎಸ್ಎಂಎಸ್ ಸ್ವೀಕರಿಸಿದ 14 ದಿನಗಳೊಳಗೆ (ರಜಾ ದಿನಗಳು, ಶನಿವಾರ ಮತ್ತು ಭಾನುವಾರ ಹೊರತುಪಡಿಸಿ) ಸ್ಕಾಲರ್ಶಿಪ್ ಪೋರ್ಟಲ್ ನಲ್ಲಿ ಸರಿಯಾದ ದಾಖಲೆಗಳ ಮರುಸಲ್ಲಿಕೆ ಮಾಡಬೇಕು.
ದಾಖಲೆಗಳನ್ನು ಹೇಗೆ ಮರುಸಲ್ಲಿಕೆ ಮಾಡಬೇಕು ಎಂಬುದನ್ನು ಈ ಕೆಳಗೆ ಹಂತ ಹಂತವಾಗಿ ವಿವರಿಸಲಾಗಿದೆ. ಪ್ರಕ್ರಿಯೆಯನ್ನು ಪ್ರಾರಂಭಿಸುವ ಮೊದಲು ಇವುಗಳನ್ನು ಎಚ್ಚರಿಕೆಯಿಂದ ಗಮನಿಸಿ.
ಸೂಚನೆ: ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸುವ ಯಾವುದೇ ಹಂತದಲ್ಲೂ ಫೌಂಡೇಷನ್ ಯಾವುದೇ ಶುಲ್ಕವನ್ನು ವಿಧಿಸುವುದಿಲ್ಲ. ಶುಲ್ಕದ ಹೆಸರಿನಲ್ಲಿ ವಂಚಿಸುವ ಜನರ ಬಗ್ಗೆ ವಿದ್ಯಾರ್ಥಿಗಳು ಎಚ್ಚರ ವಹಿಸಬೇಕೆಂದು ಕೋರಲಾಗಿದೆ.