ಕಿರು ಪರಿಚಯಗಳು, ದಿನಚರಿಗಳು, ವೀಡಿಯೋಗಳು, ಸಂಭಾಷಣೆಗಳು: ಈ ವಿಭಾಗದಲ್ಲಿರುವ ಪ್ರತಿ ಅಂಶವೂ ನಾವು ಮತ್ತು ನಮ್ಮ ಕೆಲಸದತ್ತ ನಿಮ್ಮನ್ನು ಇನ್ನಷ್ಟು ಹತ್ತಿರಕ್ಕೆ ಸೆಳೆಯುತ್ತದೆ
ನಮ್ಮ ಮೂರು ಕಾರ್ಯಾಚರಣೆಯ ಘಟಕಗಳು (ಕ್ಷೇತ್ರ ಸಂಸ್ಥೆಗಳು, ಲೋಕೋಪಕಾರಿ ಘಟಕ ಮತ್ತು ವಿಶ್ವವಿದ್ಯಾಲಯಗಳು), ನ್ಯಾಯಯುತ, ಸಮಾನ, ಮಾನವೀಯ ಮತ್ತು ಸುಸ್ಥಿರ ಸಮಾಜದ ಸ್ಥಾಪನೆಗಾಗಿ ಕೊಡುಗೆ ನೀಡುವ ಫೌಂಡೇಷನ್ನ ಧ್ಯೇಯಕ್ಕೆ ಉತ್ತೇಜನ ನೀಡಲು ಏಕೀಕೃತ ರೀತಿಯಲ್ಲಿ ಕೆಲಸ ಮಾಡುತ್ತವೆ. ಭಾರತದಾದ್ಯಂತ ಇರುವ ನಮ್ಮ ಜನರು ಮತ್ತು ಪಾಲುದಾರರಿಂದ ನೇರವಾಗಿ ಈ ಮೂರು ಘಟಕಗಳ ಸಂಕಥನಗಳ ಸಂಗ್ರಹವನ್ನು ನಾವು ನಿಮ್ಮ ಮುಂದೆ ಪ್ರಸ್ತುತ ಪಡಿಸುತ್ತಿದ್ದೇವೆ. ವಿಡಿಯೊ, ಚಲಿಸುವ ಚಿತ್ರಗಳು (ಅನಿಮೇಶನ್), ಸಂದರ್ಶನಗಳು ಮತ್ತು ಜರ್ನಲ್ಗಳ ರೂಪದಲ್ಲಿರುವ ಈ ಸಂಕಥನಗಳು, ತಾನು ತೊಡಗಿಸಿಕೊಂಡಿರುವ ವಿವಿಧ ಕ್ಷೇತ್ರಗಳಲ್ಲಿ ಫೌಂಡೇಷನ್ನ ಪಯಣ ಹಾಗೂ ಇದು ಉಂಟು ಮಾಡಿರುವ ಪರಿಣಾಮಕ್ಕೆ ಕನ್ನಡಿ ಹಿಡಿಯುತ್ತವೆ.
Alumni Story | From Textbooks to Transformation – Rethinking Education in Rural India
Can Education go beyond textbooks, theories and pragmatics to truly transform lives? Chandan (MA in Education, 2017-19) uses his academic foundation to critically engage with the public education system and develop contextual solutions.
ಕಥಾವನ 2023 – ಒಂದು
‘ಕಥಾವನ’ ಅಜೀಂ ಪ್ರೇಮ್ಜಿ ವಿಶ್ವವಿದ್ಯಾಲಯವು 2012ರಿಂದ ಆಯೋಜಿಸುತ್ತಿರುವ ಮಕ್ಕಳ ವಾರ್ಷಿಕ ದ್ವಿಭಾಷಾ (ಕನ್ನಡ ಮತ್ತು ಇಂಗ್ಲಿಷ್) ಸಾಹಿತ್ಯೋತ್ಸವ. 2023ನೇ ಸಂಚಿಕೆಯ ʼಕಥಾವನʼದಲ್ಲಿ ಅಲೆದಾಡಿ, ಕರ್ನಾಟಕದ ವಿದ್ಯಾರ್ಥಿಗಳು ಮತ್ತು ಶಿಕ್ಷಕರಿಗೆ ಮಕ್ಕಳ ಸಾಹಿತ್ಯವು ಲಭ್ಯವಾಗುವಂತೆ ಮಾಡಿದ ಮೂರು ಆಸಕ್ತಿಕರ ಕಾರ್ಯಕ್ರಮಗಳ ಬಗ್ಗೆ ತಿಳಿಯೋಣ.
ಹಳೆವಿದ್ಯಾರ್ಥಿಗಳ ಕಥೆ I ಮಿಟ್ಟಿ ಕೆಫೆ
ಮಿಟ್ಟಿ ಎನ್ನುವುದು ಆರೋಗ್ಯಕರ ಮತ್ತು ರಾಸಾಯನಿಕರಹಿತ ಆಹಾರಕ್ಕೆ ಮಾತ್ರ ಸೀಮಿತವಾಗಿಲ್ಲ. ಬದಲಾಗಿ ವಿಶೇಷ ಚೇತನ ವ್ಯಕ್ತಿಗಳು ನಡೆಸುವ ಉದ್ಯಮ ಸಮೂಹವಾಗಿದೆ. ಈ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಿ.
ಹಳೆವಿದ್ಯಾರ್ಥಿಗಳ ಕಥೆ I ಅಯಾಂಗ್
ಅಸ್ಸಾಂ ರಾಜ್ಯದಲ್ಲಿ ನದಿಯಿಂದ ಆವೃತವಾಗಿರುವ ಮಜೌಲಿ ದ್ವೀಪದ ಜನರ ಜೀವನೋಪಾಯವನ್ನು ಕಟ್ಟಿಕೊಡುವುದರತ್ತ ಹಳೆವಿದ್ಯಾರ್ಥಿಯೊಬ್ಬರು ರೂಪಿಸಿದ ʻಅಯಾಂಗ್ʼ ಸಂಸ್ಥೆ ವಿಶೇಷ ಗಮನವನ್ನು ನೀಡುತ್ತಿದೆ.
ಹೊಯ್ಸಳ ಏರೋಬಿಕ್ಸ್: ಮದನಿಕೆಯಂತೆ ಚಲಿಸಿ
ಹೊಯ್ಸಳ ದೇವಾಲಯದ ಗೋಡೆಗಳಲ್ಲಿರುವ ಕೆತ್ತನೆಯನ್ನು ಹಾಗೂ ಏರೋಬಿಕ್ಸ್ ತರಬೇತುದಾರರ ಚುರುಕಾದ ಚಲನೆಗಳನ್ನು ಒಮ್ಮೆ ಕಲ್ಪಿಸಿಕೊಳ್ಳಿ. ಎರಡನ್ನೂ ಒಟ್ಟಿಗೆ ತಂದಾಗ, ಬೆಂಗಳೂರಿನ ನಮ್ಮ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳ ಸೃಜನಶೀಲ ಕಾರ್ಯಯೋಜನೆಯೊಂದು ನಿಮ್ಮೆದುರು ಬಂದು ನಿಲ್ಲುತ್ತದೆ.

ಜೀವನದಿಗಳು | जल की नदियां | ಭಾಗ 2
ಹಿಂದಿನ ಕಾಲದಲ್ಲಿ ನಾಗರಿಕತೆಗಳು ನದಿಯ ಸುತ್ತ ಹುಟ್ಟಿ ಅಲ್ಲಿಯೇ ಕೊನೆಗೊಳ್ಳುತ್ತಿದ್ದವು. ಒಂದು ರೀತಿಯಲ್ಲಿ, ಎಲ್ಲ ಜೀವಿಗಳ ಬದುಕೂ ನದಿಯಲ್ಲೇ ಪ್ರಾರಂಭವಾಗಿ ಅಲ್ಲಿಯೇ ಕೊನೆಗೊಳ್ಳುತ್ತದೆ. ಇದನ್ನು ಆದಿ ಅಂತ್ಯ ಇಲ್ಲವೆಂದೂ ಹೇಳಬಹುದು. ಈ ಪದ್ಯವು, ನಮ್ಮ ಬದುಕಿನಲ್ಲಿ ಹೇಗೆ ಎಲ್ಲವೂ ನದಿಗಳಿಗೆ ಸಂಬಂಧಿಸಲ್ಪಟ್ಟಿದೆ ಎಂದು ತೋರಿಸಲು ಪ್ರಯತ್ನಿಸುತ್ತದೆ.